Shri Siddharoodha Swamiji Math Trust Committee

Hubballi

www.srisiddharoodhaswamiji.in

🌷🙏 ಕೌದಿ ಪೂಜಾ ಮಹತ್ವ 🙏🌷
Date : 11-03-2024
ಅದ್ವೈತ ಸಾರ್ವಭೌಮ ಚಕ್ರವರ್ತಿ, ಸ್ಥಿತಪ್ರಜ್ಞ, ನಿರಾಭಾರಿ ನಿರ್ಗುಣ ಬ್ರಹ್ಮ, ದೇಶ ಕಂಡ ಶ್ರೇಷ್ಠ ಸಂತ, ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಕೇವಲ ಕೌಪಿನ ಧಾರಣೆಯಾಗಿ ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ಸಂಚರಿಸಿದ ಮಹಾಯೋಗಿ, ಎಷ್ಟೋ ದಿನಗಳ ವರೆಗೆ ಅನ್ನ ನೀರು ತ್ಯಜಿಸಿ ತಪಸ್ಸನ್ನು ಮಾಡಿದ ಮಹಾನ್ ತಪಸ್ವಿ, ಕೊನೆಗೆ ಹುಬ್ಬಳ್ಳಿಯಲ್ಲಿ ನೆಲೆಸಿ ಭಕ್ತರು ದಾನಿಗಳು ಕೊಟ್ಟಂತ ಬಂಗಾರ ವಜ್ರ ವೈಡೂರ್ಯಗಳ ಅಲಂಕಾರದಿಂದ ಪೂಜೆ ಗೈದರು ಹಿಗ್ಗದೆ ತಲೆಯ ಮೇಲೆ ಬೆಂಕಿಯನಿಟ್ಟರು ಕುಗ್ಗದೆ ಸದಾ ಸ್ಥಿತಿಪ್ರಜ್ಞ ಸ್ಥಿತಿಯಲ್ಲಿ ಸರ್ವ ಭಕ್ತರನ್ನು ಉದ್ದರಿಸಿದ ಮಹಾನ್ ಯೋಗಿ. ನಿಜವಾದ ಸಾಧು ಸತ್ಪುರುಷರ ನಿಜ ಸ್ವರೂಪ ಮತ್ತು ವೈರಾಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ & ಸದ್ಗುರುಗಳ ಇಚ್ಚೆಯಂತೆ ವರ್ಷದಲ್ಲಿ ಒಂದು ದಿನ " ಕೌದಿ ಪೂಜೆ "ಯನ್ನು ಆಚರಣೆಗೆ ತರಲಾಯಿತು.... ಓಂ ನಮಃ ಶಿವಾಯ 🌷🙏🌷